Sunday, 8 March 2015

ಆಫೀಸ್ನ ವಾತಾವರಣ!

ಸುದ್ದಿಯ updates ತೊಗೊಂಡು ಮತ್ತೆ ನಿಮ್ಮ ಮುಂದೆ ಬಂದಿದ್ದೀನಿ . ಈಸಲದ ವಿಷಯ layoff  after effects ಮತ್ತೆ  ಆಫೀಸ್ನ  ವಾತಾವರಣದ  ಬಗ್ಗೆ.

ನಡುವೆ ಆಫೀಸ್ನ  ವಾತಾವರಣ ಹಿತಕರವಾಗಿಲ್ಲ. Layoff ಅನ್ನುವ ಭೂತ ಮೆಟ್ಟಿದ ವಾತಾವರಣವಾಗಿದೆ. 10/10 mass layoff event ಎಲ್ಲರ  ಮನದ  ಒಂದು  ಮೂಲೆಯಲ್ಲಿ  ಭಯದ ಮನೋಭಾವವನ್ನು  ಮೂಡಿಸಿದೆ . Next event ಯಾವಾಗಾಗುತ್ತದೋ  ಎನ್ನುವ  ಆತಂಕದ  ಮನೋಸ್ಥಿತಿ .ಕೆಲಸದ  ಮೇಲಿನ  ಆಸಕ್ತಿ ಕಡಿಮೆಯಾಗುತ್ತಿದೆ. Uncertainty ಹೆಚ್ಚಾಗುತ್ತಿದೆ .

ಟಾರ್ಗೆಟ್ನ ಇತಿಹಾಸದಲ್ಲಿ  ಇಂತಹ ಒಂದು  Event ಆಗಿದ್ದು  ಇದೆ  ಮೊದಲ  ಸಲ . TM's career development  ಮೇಲೆ  ಹೆಚ್ಚಿನ  ಗಮನ  ಹರಿಸುತ್ತಿದ್ದ  ಕಂಪನಿ  Employees   layoff ಮಾಡುತ್ತಾರೆ  ಅಂತ  ಯಾರು  ಕನಸು  ಮನಸಿನಲ್ಲೂ  ಎಣಿಸಿರಲಿಲ್ಲ . 10/10 event ಎಲ್ಲರಿಗೂ  ಒಂದು  ಎಚ್ಚರಿಕೆಯ  ಪಾಠವಾಗಿದೆ. ಮುಂದೆ  ಆಗುವ  ಸಂಭವಗಳು ಹೆಚ್ಚಾಗುತ್ತಿದೆ. ಈಗಾಗಿದ್ದು  ಬರಿ trailer ಮಾತ್ರ, Abhi bi picture baaki hai ಎನ್ನುವ  dialogue ಎಲ್ಲರ  ಬಾಯಲ್ಲೂ ಹರಿದಾಡುತ್ತಿದೆ . ಗಂಭೀರವಾದ ವಿಷಯ ಈಗ ಎಲ್ಲರಿಗೂ  ತಮಾಷೆಯ  ವಿಷಯವಾಗಿದೆ . ಮುಂದೆ  ಏನೇ ಆದರೂ ಎಲ್ಲರೂ  ಸಿದ್ದವಾಗಿದ್ದಾರೆ . I am prepared as well. ಕೆಲವೊಂದು  ಸಲ   ಇಷ್ಟೊಂದು  ಯೋಚನೆ  ಮಾಡುವ  ಅವಶ್ಯಕತೆ  ಇಲ್ಲ  ಅಂತ ಅನ್ನಿಸುತ್ತದೆ . ಆಗೋದಂತೂ  ಆಗೇ ಆಗುತ್ತದೆ . ಹಾಗಿದ್ದ  ಮೇಲೆ  ಯೋಚನೆ  ಇಂದ  ಟೈಮ್  waste ಮಾಡುವ  ಅವಶ್ಯಕತೆ  ಇಲ್ಲ  ಅಂತ . There is life beyond all these.   ಕೆಲಸ  ಇಲ್ಲದೇದ್ರೆ ಏನಂತೆ  ಇನ್ನೊಂದು  ಕೆಲಸ . ನಮ್ಮ  ಬೆಂದಕಾಳೂರಿನಲ್ಲಿ  ಕಂಪನಿಗಳಿಗೇನು  ಬರ !!!

10/10 event ನಿಂದ  ಮ್ಯಾನೇಜ್ಮೆಂಟ್  ಒಂದು  ಪಾಠ  ಕಲಿತಿದೆ . External consultants ಹಾಗೂ  Severance package deal ಹೆಚ್ಚೂ ಕಮ್ಮಿ 10M ವರೆಗೂ ಮುಟ್ಟಿದೆ. Quiet expensive layoff. Consultants ಗೇನೆ ಸುಮಾರು 5m ಸುರಿದಿದ್ದಾರೆ ಎಲ್ಲ legal aspects  handle ಮಾಡಲು. ಮುಂದೆ  ಆಗುವ  events ಗೆ  ಇಷ್ಟು  ಖರ್ಚು ಮಾಡಿದರೆ ಕಂಪನಿಯ financial crisis ಇನ್ನೂ ಹದಗೆಡುತ್ತದೆ . ಆದ್ದರಿಂದ ಎಚ್ಚರ ವಹಿಸುತ್ತಿದ್ದಾರೆ. ಹಾಗಂತ  resource ಕಡಿತ  ನಿಲ್ಲೋದಿಲ್ಲ. Performance management ಮುಖಾಂತರ  headcount ಕಡಿಮೆ  ಮಾಡುವ  ಹುನ್ನಾರ . Process slow ಆಗಬಹುದು.

Next speculated date ಇದ್ದದ್ದು  11/20 ಮತ್ತೆ  1/15. ಆದರೆ  11/20  ಅಂದು  ಏನೂ  ಆಗಲಿಲ್ಲ . ಆಗುವ  probabilities ತುಂಬಾ  ಕಮ್ಮಿ  ಇತ್ತು ಅನ್ನಬಹುದು . Peak season ಸ್ಟಾರ್ಟ್  ಆಗಿರೋದ್ರಿಂದ  ಇಂಥ  ಟೈಮ್  ನಲ್ಲಿ  layoff ಮಾಡಿದರೆ  sales ಗೆ  ಮತ್ತಷ್ಟು  ಹೊಡೆತ  ಬೀಳುವ  ಸಂಭವಗಳು  ಹೆಚ್ಚು . Q3 sales Q2 ಗಿಂತ  ಸ್ವಲ್ಪ ಸುಧಾರಿಸಿದರೂ last year    mark reach ಆಗಿಲ್ಲ . ಹಾಗಾಗಿ  risk ತೊಗೊಳೋದ್ದಿಲ್ಲ ಅಂತ  ಒಂದು  ಭರವಸೆ ಇತ್ತು . ಹಾಗೇ ಆಯಿತು . ಅಂತು ದೀಪಾವಳಿಯ  ಧಮಾಕ  ಸದ್ಯಕ್ಕೆ  November ನಲ್ಲಿ  ಇರುವುದಿಲ್ಲ  , December peak season ಆಗಿರೋದ್ರಿಂದ ಅವಾಗಲೂ ಆಗೋದಿಲ್ಲ . ಇನ್ನು  January ಯಲ್ಲಿ  ಸಂಕ್ರಾಂತಿಯ  ಸಕ್ಕರೆ ಪೊಂಗಲ್ ತಿನ್ನಿಸುತ್ತಾರ  ಅಥವಾ ಖಾರ  ಪೊಂಗಲ್  ತಿನ್ನಿಸುತ್ತಾರ ಅಂತ ಕಾದು ನೋಡಬೇಕು . Anything can happen!! ಕಾದು ನೋಡಬೇಕು .

ಮುಂದೇನಾಗುತ್ತದೆ ಎನ್ನುವ  ಆತಂಕದ  ಕ್ಷಣ  ಎಲ್ಲರ  ಮನದಲ್ಲೂ  ಇದೆ . ನನ್ನ ಮನಸ್ಥಿಯೂ  ಇದಕ್ಕೆ  ಹೊರತಾಗಿಲ್ಲ . After all everyone is dispensable. ಹಾಗಂತ ಇಂದಿನ ಕ್ಷಣವನ್ನು  ಮರೆತು  ಮುಂದಾಗುವ  ಕ್ಷಣವನ್ನು  ಯೋಚಿಸಿ  ಫಲವಿಲ್ಲ . ವಾತಾವರಣದಿಂದ  ಒಂದು  break ತೊಗೊಳ್ಳುವ  ಯೋಚನೆ . ಗಾಂಧೀ ಹುಟ್ಟಿದ  ನಾಡು  Gujarat ಗೆ  ಹೋಗುವ  ಬಯಕೆ .  Incredible ಇಂಡಿಯಾದಲ್ಲೊಂದು memorable journey ಮಾಡುವ ಆಸೆ !!!

No comments:

Post a Comment