Tuesday, 31 December 2013

Porabandar


ಪೋರಬಂದರ್ ಗಾಂಧೀಜಿ ಹುಟ್ಟಿದ ಸ್ಥಳ.ಸ್ಕಂದ ಪುರಾಣದಲ್ಲಿ ಇದನ್ನು ಸುದಾಮಪುರಿ ಎಂದು ವರ್ಣಿಸಲಾಗಿದೆ. ಪುರಾಣದಲ್ಲಿ ಈ ನಗರಿಯನ್ನು ಸುದಾಮ ಹಾಗು ಕೃಷ್ಣನ ಮಧ್ಯೆ ಇದ್ದ ಸ್ನೇಹಕ್ಕೆ ಕೊಂಡಿ ಎಂದಿದ್ದಾರೆ. ಮೊದಲು ನಾವು ಕೀರ್ತಿ ಮಂದಿರಕ್ಕೆ ಹೋದೆವು. ಇದು ಗಾಂಧೀಜಿ ಹಾಗು ಕಸ್ತೂರಭ ಮನೆ. ಈಗ ಇದನ್ನು ಸಣ್ಣ museum , ಲೈಬ್ರರಿ ಹಾಗು ಪ್ರಾರ್ಥನಾ ಮಂದಿರವನ್ನಾಗಿ ಮಾಡಿದ್ದಾರೆ. ಗಾಂಧೀಜಿಯ ಬಗ್ಗೆ ಸಾಕಷ್ಟು ಪುಸ್ತಕ ಹಾಗು ಫೋಟೋಗಳನ್ನು ಸಂಗ್ರಹಿಸಿದ್ದಾರೆ.


ಕೀರ್ತಿ ಮಂದಿರವನ್ನು ನೋಡಿದ ನಂತರ ಸುಧಾಮ ದೇವಸ್ಥಾನಕ್ಕೆ ಹೋದೆವು. ದೇವಸ್ಥಾನದ ಮುಂದೆ ಸುಧಾಮ ಚಕ್ರವಿತ್ತು. ಜನರು ಆ ಚಕ್ರವನ್ನು ಸುತ್ತಾಕುತಿದ್ದರು. ಅದರ ಪ್ರಾಮುಖ್ಯತೆ ತಿಳಿದುಬರಲಿಲ್ಲ. ದೇವಸ್ಥಾನವನ್ನು ಕಂಡು ಅಲ್ಲಿಂದ ಹೊರಟೆವು ದ್ವಾರಕೆಯ ಕಡೆಗೆ.




No comments:

Post a Comment