Tuesday, 31 December 2013

Jamnagar

ದ್ವಾರಕದಿಂದ ಟ್ಯಾಕ್ಸಿ ಮಾಡಿಕೊಂಡು Jamnagar  ಕಡೆ ತೆರಳಿದೆವು. ಹೋಟೆಲ್ ನಲ್ಲಿ  checkin ಮಾಡಿ ನಂತರ "Marine National Park"ಗೆ ಹೊರಟೆವು. ದೊಡ್ಡ ಅಲೆಗಳು ಅಪ್ಪಳಿಸಿದ ಮೇಲೆ 2 ಗಂಟೆಗಳ ನಂತರ ಲೇಕ್ ನಲ್ಲಿರುವ ಎಲ್ಲ Marine Species ದಡದ ಬಳಿ ಬರುತ್ತದೆ, ಆಗ ಸಮುದ್ರ ನದಿಗೆ ಮಾಡಿದರೆ ನೀರಿನಲ್ಲಿರುವ ಎಲ್ಲ ಮರೀನ್ animalsನ ನೋಡಬಹುದು. ಇದನ್ನು Coral walk ಎಂದು ಕರೆಯುತಾರೆ. ನಾವು ಸಹ ಗೈಡ್ ನ ಕರೆದುಕೊಂಡು coral ವಾಕ್ ಗೆ ಹೊರಟೆವು. ನಮ್ಮ ಜೊತೆ ಬಂಡ ಗೈಡ್ ತುಂಬಾ experienced. ಅವರಿಗೆ ಯಾವ ಕಲ್ಲು ಅಥವಾ ಬಂಡೆಯ ಕೆಳಗಡೆ ಯಾವ species ಇರುತ್ತದೆ ಅಂತ ತಿಳಿದಿರುತ್ತಿತ್ತು. ಹಾಗೆ ಒಂದೊಂದಾಗಿ ನಮಗೆ ತೋರಿಸತೊಡಗಿದರು. ಅಲ್ಲಿ Puffer fish, crab, hairy crab, sea cucumber, star fish, stingray ಎಲ್ಲ ಕಾಣಿಸಿತು. ಅವುಗಳನ್ನು ನಮ್ಮ ಕೈನಲ್ಲಿ ಹಿಡಿದು ನೋಡುವ ಅವಕಾಶವು ಒದಗಿ ಬಂದಿತು. ಇದು ರೋಮಾಂಚನಕಾರಿ ಅನುಭವ. ಗೈಡ್ ಇಲ್ಲದೆ ಇವೆಲ್ಲ speciesನ ನೀರಿನಲ್ಲಿ ಕಂಡು ಹಿಡಿಯುವುದು ಕಷ್ಟ. ಸುಮಾರು 3 ಗಂಟೆಗಳ ಕಾಲ coral ವಾಕ್ ಮಾಡಿದ ಮೇಲೆ ವಾಪಸ್ ಬಂದು ಹೋಟೆಲ್ ತಲುಪಿದೆವು. ಊಟ ಮುಗಿಸಿ ರಾತ್ರಿಯ ನಿದ್ರೆ ಮುಗಿಸಿದೆವು.


ಮಾರನೆ ದಿನ ಬೆಳಗ್ಗೆ ಮತ್ತೆ Jamnagariಯ ಸುತ್ತ ಮುತ್ತಲ ಸ್ಥಳಗಳನ್ನು ನೋಡಲು ಹೊರಟೆವು. ಮೊದಲು ಲಕೋಟ ಪ್ಯಾಲೇಸ್ ಗೆ ಹೊರಟೆವು. ಆದರೆ ನಾವು ಹೋದ ದಿನ ಪ್ಯಾಲೇಸ್ ಬಂದ್ ಆಗಿತ್ತು. ಆದರೆ ಪ್ಯಾಲೇಸ್ ನ Ranmal Lake ನೋಡಲು ಸುಂದರವಾಗಿತ್ತು. ಸಾಕಷ್ಟು Ducks ಮತ್ತೆ Pigeons ಅಲ್ಲಿ ನೋಡಲು ಸಿಕ್ಕಿತು. ಹಾಗೆ ಅಲ್ಲಿಂದ ಮುಂದೆ ಬಾಲ ಹನುಮಾನ್ ದೇವಸ್ಥಾನಕ್ಕೆ ಬಂದೆವು. ಈ ದೇವಸ್ಥಾನದ ವಿಶೇಷತೆಯೇನೆಂದರೆ ಇಲ್ಲಿ 1964 ರಿಂದ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಎಂದು ಶ್ರೀರಾಮನ ನಾಮ ಪಠನೆಯಾಗುತ್ತಿದೆ. Guiness Book of Recordsನಲ್ಲೂ ಈ ದೇವಾಲಯ ಹೆಸರು ಪಡೆದಿದೆ. ನಾವು 5-10 ನಿಮಿಷ ರಾಮನಾಮ ಪಠನೆ ಮಾಡಿ, ನಂತರ ಅಲ್ಲಿಂದ ಮುಂದಕ್ಕೆ "Khijadiya Bird Sanctuary" ಗೆ ಹೊರಟೆವು. ಅಲ್ಲಿ ನೂರಾರು ತರಹದ ವಿಧ ವಿಧ ಪಕ್ಷಿಗಳು ನಮಗೆ ಕಾಣ ಸಿಕ್ಕವು. ಸಂಜೆಗೆ ಒಂದು ಜೈನ ದೇವಸ್ಥಾನಕ್ಕೆ ಬೇಟಿ ಕೊಟ್ಟು ಹೋಟೆಲ್ಗೆ ಮರಳಿ ದಿನದ ಕಾರ್ಯಕ್ರಮವನ್ನು ಮುಗಿಸಿದೆವು.


Dwaraka

ದ್ವಾರಕ ತಲುಪಿದ ಮೇಲೆ ಮೊದಲು ಹೋಗಿದ್ದು ದ್ವಾರಕದೀಶ್ ದೇವಸ್ಥಾನಕ್ಕೆ. ದೊಡ್ಡ ದೇವಸ್ಥಾನ, ಜನರಿಂದ ತುಂಬಿತ್ತು. ಸಂಜೆಯ ಆರತಿಗೆ ಕಾದಿದ್ದೆವು. ದೇವಸ್ಥಾನದ ವಳಾಂಗಣ ಆಹ್ಲಾದಕರ ವಾತಾವರಣದಿಂದ ತುಂಬಿತ್ತು. ಕೆಲವು ಭಕ್ತರು ಭಜನೆ, ನೃತ್ಯ ಮಾಡಲು ಶುರುಮಾಡಿದರು. Very nice experience.ಆರತಿ ಮುಗಿದ ಮೇಲೆ ಕೃಷ್ಣನ ದರ್ಶನ ಪಡೆದು ಹೋಟೆಲ್ ಗೆ ಮರಳಿದೆವು.


ದ್ವಾರಕ ದೇವಾಲಯವು ಪ್ರಪಂಚದ ಒಂದು ಪುಣ್ಯಸ್ಥಳಗಳಲ್ಲಿ ಒಂದು. ಇಲ್ಲಿಗೆ ದೇಶ ವಿದೇಶ ಗಳಿಂದ ಜನರು ಬರುತ್ತಾರೆ. ಪುರಾಣದ ಪ್ರಕಾರ ಶ್ರೀ ಕೃಷ್ಣನು ಮಥುರ ನಗರಿಯನ್ನು ಬಿಟ್ಟು ದ್ವಾರಕೆಗೆ ಬಂದು ನೆಲೆಸುತ್ತಾನೆ ಗೋಮತಿ ನದಿಯ ಬಳಿ. ದ್ವಾರಕದೀಶ್ ದೇವಸ್ಥಾನವು ಸುಮಾರು 1400 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು. 

ಮಾರನೆ ದಿನ ಬೆಳಗ್ಗೆ ಬೈಟ್ ದ್ವಾರಕಗೆ ಹೊರಟಿದ್ವಿ. ಮೊದಲು ನಾಗೇಶ್ವರ್ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಹೊರಟೆವು. ಈ ದೇವಾಲಯದ ಹೊರಗಡೆ ದೊಡ್ಡದಾದ ಶಿವನ ಪ್ರತಿಮೆ ಇದೆ. ಶಿವನ ಸನ್ನಿದಿಯಲ್ಲಿ ಜ್ಯೋತಿರ್ಲಿಂಗದ ಸ್ತ್ರೋತ್ರವನ್ನು ಪಠಿಸಿ ನಮ್ಮ ಪಯಣ ವನ್ನು ಮುಂದುವರೆಸಿದೆವು.


ಇಲ್ಲಿಂದ ಮುಂದೆ ಗೋಪಿ ತಲಬ್ ಗೆ ಹೋದೆವು. ಪುರಾಣದ ಪ್ರಕಾರ ಇಲ್ಲಿ ಗೋಪಿಕಾಸ್ತ್ರೀಯರು ಸ್ನಾನ ಮಾಡುತಿದ್ದರೆಂದು ಪ್ರತೀತಿ. ಅಲ್ಲಿಂದ ಮುಂದೆ ಗೋಮತಿ ನದಿಯನ್ನು ದಾಟಿ ಬೋಟ್ ನಲ್ಲಿ ಬೈಟ್ ದ್ವಾರಕಗೆ ಹೊರಟೆವು. 30 ನಿಮಿಷಗಳ ದೋಣಿ ವಿಹಾರ. ದೋಣಿ ವಿಹಾರ ಆಹ್ಲಾದಕರವಾಗಿತ್ತು. ಆಚೆಯ ದಡ ಸೇರಿ ಕೃಷ್ಣನ ದರ್ಶನವನ್ನು ಪಡೆವು ಮರಳಿ ಬಂದಿದ್ದೆವು. ಅಲ್ಲಿಂದ ಮುಂದೆ ರುಕ್ಮಿಣಿ ದೇವಸ್ಥಾನಕ್ಕೆ ಹೊರಟೆವು.



ಮರಳಿ ನಮ್ಮ ಹೊರಟ ಜಾಗಕ್ಕೆ ಮರಳುವ ಹೊತ್ತಿಗೆ ಮಧ್ಯಾನವಾಗಿತ್ತು.ಊಟ ಮುಗಿಸಿ ಹೋಟೆಲ್ ತಲುಪಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದೆವು. ಸಾಯಂಕಾಲ ಕೆಲವು ಹತ್ತಿರದ ಸ್ಥಳಗಳನ್ನು ನೋಡಲು ಹೊರಟೆವು. ಬ್ರಹ್ಮ ಕುಮಾರಿ ಆರ್ಟ್ ಗ್ಯಾಲರಿ, ಗಾಯತ್ರಿ ಶಕ್ತಿ ಪೀಠ, ಗೀತ ಮಂದಿರ, ಸಿದ್ದೇಶ್ವರ ಮಹಾದೇವ ದೇವಸ್ಥಾನ ಮತ್ತೆ ಭಡಕೇಶ್ವರ ದೇವಸ್ಥಾನ.


ಸೂರ್ಯ ಮುಳುಗುವ ದೃಶ್ಯ ಭಡಕೇಶ್ವರ ದೇವಸ್ಥಾನದಿಂದ ಬಲು ಮನೋಹರವಾಗಿ ಕಾಣುತ್ತದೆ. ನಮ್ಮ ಕ್ಯಾಮೆರಗಳಲ್ಲಿ ಈ ಮನೋಹರ ದೃಶ್ಯಗಳನ್ನು ಸೆರೆಹಿಡಿದು ಹೋಟೆಲ್ ಗೆ ಮರಳಿದೆವು. 




Porabandar


ಪೋರಬಂದರ್ ಗಾಂಧೀಜಿ ಹುಟ್ಟಿದ ಸ್ಥಳ.ಸ್ಕಂದ ಪುರಾಣದಲ್ಲಿ ಇದನ್ನು ಸುದಾಮಪುರಿ ಎಂದು ವರ್ಣಿಸಲಾಗಿದೆ. ಪುರಾಣದಲ್ಲಿ ಈ ನಗರಿಯನ್ನು ಸುದಾಮ ಹಾಗು ಕೃಷ್ಣನ ಮಧ್ಯೆ ಇದ್ದ ಸ್ನೇಹಕ್ಕೆ ಕೊಂಡಿ ಎಂದಿದ್ದಾರೆ. ಮೊದಲು ನಾವು ಕೀರ್ತಿ ಮಂದಿರಕ್ಕೆ ಹೋದೆವು. ಇದು ಗಾಂಧೀಜಿ ಹಾಗು ಕಸ್ತೂರಭ ಮನೆ. ಈಗ ಇದನ್ನು ಸಣ್ಣ museum , ಲೈಬ್ರರಿ ಹಾಗು ಪ್ರಾರ್ಥನಾ ಮಂದಿರವನ್ನಾಗಿ ಮಾಡಿದ್ದಾರೆ. ಗಾಂಧೀಜಿಯ ಬಗ್ಗೆ ಸಾಕಷ್ಟು ಪುಸ್ತಕ ಹಾಗು ಫೋಟೋಗಳನ್ನು ಸಂಗ್ರಹಿಸಿದ್ದಾರೆ.


ಕೀರ್ತಿ ಮಂದಿರವನ್ನು ನೋಡಿದ ನಂತರ ಸುಧಾಮ ದೇವಸ್ಥಾನಕ್ಕೆ ಹೋದೆವು. ದೇವಸ್ಥಾನದ ಮುಂದೆ ಸುಧಾಮ ಚಕ್ರವಿತ್ತು. ಜನರು ಆ ಚಕ್ರವನ್ನು ಸುತ್ತಾಕುತಿದ್ದರು. ಅದರ ಪ್ರಾಮುಖ್ಯತೆ ತಿಳಿದುಬರಲಿಲ್ಲ. ದೇವಸ್ಥಾನವನ್ನು ಕಂಡು ಅಲ್ಲಿಂದ ಹೊರಟೆವು ದ್ವಾರಕೆಯ ಕಡೆಗೆ.




Somnath



Diu ಇಂದ ಹೊರಟು  ಸಂಜೆ  ಹೊತ್ತಿಗೆ  ಸೋಮನಾಥ್  ತಲುಪಿದೆವು . ಹೋಟೆಲ್  ನಲ್ಲಿ  checkin ಮಾಡಿ ಸ್ವಲ್ಪ   freshen up ಆಗಿ ದೇವಸ್ಥಾನಕ್ಕೆ ಹೊರಟೆವು . ನಾವು  ಉಳಿದುಕೊಂಡ  ಹೋಟೆಲ್  ಎದುರಿನಲ್ಲೇ  ದೇವಸ್ಥಾನ ಇದ್ದದ್ದು . ನಾವು ದೇವಸ್ಥಾನದ  ಒಳಗೆ  ಹೋಗೋಷ್ಟರಲ್ಲಿ  Sound and Light show ಶುರು  ಆಗಿತ್ತು . ದೇವಸ್ಥಾನದ  ಮಧ್ಯಭಾಗದಲ್ಲಿದ್ದ  ದೊಡ್ಡ  ಒಳಾಂಗಣದಲ್ಲಿ  ಇದನ್ನು  ವ್ಯವಸ್ಥೆ ಮಾಡಿದ್ದರು . ದೇವಸ್ಥಾನದ  ಪುರಾಣದ  ಬಗ್ಗೆ  ಮಾಹಿತಿ  ಕೊಟ್ಟರು .

ಸೋಮನಾಥ  ದೇವಾಲಯವು  ಶಿವನ ಜ್ಯೋತಿರ್ಲಿಂಗವಿರುವ  ದೇಗುಲವಾಗಿದೆ.ಪುರಾಣದ  ಪ್ರಕಾರ  ಈ  ದೇವಾಲಯವನ್ನು  ಚಂದ್ರದೇವನಾದ  ಸೋಮರಾಜನು ಇದನ್ನು  ಚಿನ್ನದಿಂದ  ಕಟ್ಟಿಸಿದ್ದನು, ನಂತರ ರಾವಣನು  ಇದನ್ನು  ಮತ್ತೆ  ಬೆಳ್ಳಿಯಿಂದ  ಕಟ್ಟಿಸಿದನು , ಕೃಷ್ಣನು  ಇದನ್ನು  ಮರದಿಂದ  ಹಾಗು  ಭೀಮನು  ಇದನ್ನು  ಕಲ್ಲಿನಿಂದ ಕಟ್ಟಿಸಿದ ಎಂಬುದು  ಪ್ರತೀತಿ . ಮೊಹಮದ್  ಘಜ್ನಿ  ಈ  ದೇಗುಲವನ್ನು  ನಾಶಮಾಡಿ ಇದರಲ್ಲಿದ್ದ  ಸಂಪತ್ತನ್ನು  ಎಲ್ಲ  ಲೂಟಿ  ಮಾಡಿದನು . ಹಿಂದೂಗಳು  ಮತ್ತೆ  ಈ  ದೇಗುಲವನ್ನು ಪುನಃ  ಕಟ್ಟಿಸಿದರು . ಮತ್ತೆ  ಮುಸ್ಲಿಮರಿಂದ  ನಾಶವಾಯಿತು . ಹೀಗೆ ಸುಮಾರು  ಸಲ ಈ  ದೇವಾಲಯವು ನಾಶವಾಗಿ  ಪುನರ್ನಿರ್ಮಾಣವಾಗಿದೆ . ಕೊನೆಗೆ  ಇದನ್ನು  ಸರ್ದಾರ್  ವಲ್ಲಭಾಯಿ ಪಟೇಲರು ತಮ್ಮ  ಕಾಲದಲ್ಲಿ  ನಿರ್ಮಾಣ  ಮಾಡಿದರು .

ದೇವಸ್ಥಾನದ ಒಳಗೆ  ಹೋಗಿ  ಸೋಮನಾಥಾನ  ದರ್ಶನವನ್ನು  ಪಡೆದೆವು . ದರ್ಶನವನ್ನು  ಮುಗಿಸಿ  ಹೋಟೆಲ್  ತಲುಪಿ , ಊಟ  ಮುಗಿಸಿ  ನಿದ್ರಾದೇವಿಯ  ತೆಕ್ಕೆಗೆ  ಜಾರಿಕೊಂದೆವು . ಮಾರನೆ  ದಿನ ಬೆಳಗ್ಗೆ  ಬೇಗನೆ  ಎದ್ದು  ಬೆಳಗ್ಗಿನ  ಆರತಿಗೆ  ಹೊರಟೆವು . ಮತ್ತೆ  ಸೋಮನಾಥಾನ  ದರ್ಶನ  ವನ್ನು  ಮುಗಿಸಿ  ಅಲ್ಲೇ ದೇವಸ್ಥಾನದ ಹೊರಾಂಗಣದಲ್ಲಿ  ಅರೇಬಿಯನ್  ಸಮುದ್ರದ  ಸೌಂದರ್ಯವನ್ನು ಸವಿಯುತ್ತ  ಜ್ಯೋತಿರ್ಲಿಂಗ  ಸ್ತ್ರೋತ್ರವನ್ನು  ಓದಿ  ಮುಗಿಸಿ  ದೇವಸ್ಥಾನದ ಹೊರ  ಬಂದೆವು . ಅಲ್ಲಿಂದ  ಹೋಟೆಲ್  ನ  ಖಾಲಿ  ಮಾಡಿ  ದ್ವಾರಕೆಯ  ಕೃಷ್ಣನ  ಬೇಟಿಗೆ  ಸಜ್ಜಾದೆವು . ದ್ವಾರಕೆಗೆ  ಹೊರಡುವ ದಾರಿಯಲ್ಲಿ  ಪೋರಬಂದರನ್ನು  ವೀಕ್ಷಿಸಿ  ನಂತರ  ಹೊರಡುವ  ಪ್ಲಾನ್  ಇತ್ತು .

Diu

ನಾವು Sasan Gir ನಿಂದ  ಹೊರಟು Diu ಕಡೆ  ಪ್ರಯಾಣವನ್ನು  ಮುಂದುವರೆಸಿದ್ದೆವು . Diu ತಲುಪುವಷ್ಟರಲ್ಲಿ  ಬೆಳಗ್ಗೆ  11 ಗಂಟೆ  ಆಗಿತ್ತು . Diu ಒಂದು Union territory. ಇದು  ಅರೇಬಿಯನ್  ಸಮುದ್ರದಲ್ಲಿರುವ ಒಂದು  ಸಣ್ಣ  ದ್ವೀಪ , ಸುಮಾರು 11kms ಉದ್ದ ಮತ್ತೆ  3 kms ಅಗಲದ  ಅಳತೆ . ಈ  ಸುಂದರವಾದ  ದ್ವೀಪದಲ್ಲಿ  beaches, ಚರ್ಚ್ galu, ಬಜಾರ್ , portuguese ಕಾಲದ  fort ಇವೆ. Mythology ಯ ಪ್ರಕಾರ ಮಹಾಭಾರತದ ಪಾಂಡವರು  ತಮ್ಮ  14 ವರ್ಷದ ವನವಾಸದ ಸ್ವಲ್ಪ ಕಾಲವನ್ನು  ಇಲ್ಲಿ  ಕಳೆದಿದ್ದರೆಂದು  ಪ್ರತೀತಿ .Diu 15-16 century ಯಲ್ಲಿ  Portugues ರಿಂದ ಆಳಲ್ಪಟ್ಟಿತ್ತು .


ನಾವು  Diu ತಲುಪಿದ  ಮೇಲೆ  ಮೊದಲು  Panikota Fortum Diu Mar ಗೆ  ಬೋಟ್  ನಲ್ಲಿ  ಹೊರಟಿದ್ದೆವು . ಇದು ದ್ವೀಪದಲ್ಲಿರುವ  ಒಂದು  ಆಗಿನ  ಕಾಲದ  ಸೆರೆಮನೆ. Panikota, ಒಂದು  ಸುಂದರವಾದ  ಸಮುದ್ರದಲ್ಲಿರುವ  ಕಲ್ಲಿನ  ಅಮೋಘವಾದ ಕಟ್ಟಡ. ಈ  Fortress ಅಲ್ಲಿ  ಒಂದು  Light house ಮತ್ತೆ  ಒಂದು  ಸಣ್ಣ  chapel ಇದೆ . ಇಲ್ಲಿಂದ  ಅರೇಬಿಯನ್  ಸಮುದ್ರದ ನೋಟ ತುಂಬಾ  ಸುಂದರ . Motor Launch ಮುಖಾಂತರ ಇಲ್ಲಿಗೆ  ತಲುಪಬೇಕು . Boat ನ  ಪ್ರಯಾಣ  ಉಲ್ಲಾಸಕರವಾಗಿತ್ತು.  Panikota ತಲುಪಿ  ಅಲ್ಲಿ  ಕೆಲವು ಫೋಟೋಸ್ನ  ತೆಗೆದುಕೊಂಡೆವು . ಅಲ್ಲಿಂದ  ಮತ್ತೆ  Boat ನ  ಮುಖಾಂತರ  ಮತ್ತೆ  ವಾಪಸ್  ಬಂದು  ಅಲ್ಲಿಂದ  Diu fort ಗೆ  ಹೊರಟೆವು .


Diu Fort ಬಲು ದೊಡ್ಡ  ಕೋಟೆ . ಇದು  15th century ಯಲ್ಲಿ  ಗುಜರಾತ್  Sultan ಮತ್ತೆ  portuguesರ ಮಧ್ಯೆ treaty ಒಪ್ಪಂದವಾದಾಗ ಕಟ್ಟಿದ್ದು . ಸಮುದ್ರದಿಂದ  ಸುತ್ತುವರೆದ  ಕೋಟೆ  ನೋಡಲು ಬಲು  ಸುಂದರ . ಈ  ಕೋಟೆಯ  ಒಳಗಡೆ  chappel, light house ಇವೆ .


ಕೋಟೆಯನೆಲ್ಲ  ಸುತ್ತಿದ  ಮೇಲೆ , ಅಲ್ಲಿಂದ  St. Paul's church ಗೆ  ಹೊರಟೆವು . ಇದು  ಬಲು  ದೊಡ್ಡ  church. ಚರ್ಚಿನ ಒಳಗಡೆ  ಹೋಗಿ  ಯೇಸುವನ್ನು  ಕಂಡು  ಬಂದೆವು . ಅಲ್ಲಿಂದ  ಹೊರಟು  shell Museum ಗೆ  ಹೊರಟೆವು . ಆದರೆ  ನಮ್ಮ  ದುರಾದುಷ್ಟಕ್ಕೆ  Museum close ಆಗಿತ್ತು . ಮತ್ತೆ  ಸಂಜೆಗೆ  ತೆಗಿಯುವುದು  ಅಂದರು . ಆದರೆ  ನಮಗೆ  ಅಲ್ಲಿಯವರೆಗೂ  ಕಾಯುವ  ಸಮಯವಿಲ್ಲದಿದ್ದುರಿಂದ  ಅಲ್ಲಿಂದ  ಹೊರಟು  ಬಿಟ್ಟೆವು . ಈ museum ನಲ್ಲಿ  ಅತಿ  ಚಿಕ್ಕ  ಹಾಗು  ಅತಿ  ದೊಡ್ಡ  shell ಅನ್ನು  ಪ್ರದರ್ಶನಕಿಟ್ಟಿದ್ದಾರಂತೆ .


ಅಲ್ಲಿಂದ  ಮುಂದೆ  ಗಂಗೇಶ್ವರ್  ದೇವಸ್ಥಾನಕ್ಕೆ ಹೋದೆವು .ಇದು  ಶಿವನ  ದೇವಸ್ಥಾನ . 5 ಶಿವ  ಲಿಂಗಗಳು  ಸಮುದ್ರದ  ಅಂಚಿನ  ಬಳಿ ಇದೆ . ಸಮುದ್ರದ  ಆಳೆತ್ತರದ  ಅಲೆಗಳು ಈ  ಶಿವ  ಲಿಂಗಗಳನ್ನು  ತೊಳೆದು  ಹೋಗುತ್ತದೆ . Mythology ಪ್ರಕಾರ ಈ  5 ಲಿಂಗಗಳನ್ನು  ಪಂಚ  ಪಾಂಡವರು  ನಿರ್ಮಿಸಿದರೆಂದು  ಪ್ರತೀತಿ .


ಶಿವನ  ದರ್ಶನವನ್ನು ಪಡೆದು  Nagoa beach ಗೆ  ಹೊರಟೆವು . Nagoa beach ದೊಡ್ಡ  beach. Goa beachನ  ವಾತಾವರಣ  ಇತ್ತು . Paragliding, Parasailing ಹಾಗು ಸಾಕಷ್ಟು water games ನಡೆಯುತ್ತಿತ್ತು . ಅಲ್ಲಿ  ಸ್ವಲ್ಪ  ಸಮೆಯ  ಕಳೆದು  ಹೊರಟು  ಬಿಟ್ಟೆವು . ಸಂಜೆಗೆ  ಸೋಮನಾಥನ  ಕಡೆ  ಪ್ರಯಾಣ  ಬೆಳೆಸಬೇಕಿತ್ತು .


Sasan Gir

ಬೆಳಗ್ಗಿನ  ಜಾವ  ಜುನಾಗಡ್  ನಿಂದ  ಹೊರಟು Sasan Gir ತಲುಪಿದ್ವಿ . Gir forest ನಲ್ಲಿ  ಸಫಾರಿ  ಹೋಗುವ  ಪ್ಲಾನ್  ಇತ್ತು . ಮಧ್ಯಾನದ  ಸಫಾರಿ  ಟ್ರಿಪ್  ಸಿಕ್ಕಿತ್ತು . 1 gypsy open top vehicle ನಲ್ಲಿ  ಹೊರಟಿದ್ವಿ. 2.30 ಗಂಟೆಗಳ  ಸಫಾರಿ  ಆಗಿತ್ತು .




Gir forest ಎಂಟರ್  ಆದ್ವಿ. ಸ್ವಲ್ಪ  ದೂರ  ಹೋಗೋಷ್ಟೊತ್ತಿಗೆ  spotted deers ಕಾಣಿಸಿತು . ಇದಾದ  ಮೇಲೆ  sambars, ವಿಧ  ವಿಧವಾದ  ಪಕ್ಷಿಗಳು , peacock ಎಲ್ಲ  ಕಾಣಿಸಿದವು .





ಕೊನೆಗೂ  ನಾವು  ನೋಡ  ಬೇಕಿದ್ದ  ಸಿಂಹ  ಕಾಣಿಸಿತು . A female Lion. ಮಧ್ಯಾನದ  ಊಟ  ಮುಗಿಸಿ  ಮರದ  ಕೆಳಗೆ  ವಿಶ್ರಾಂತಿ  ಪಡೆಯುತ್ತಿತ್ತು . ದೂರದಿಂದ ಒಂದು  glimpse ಸಿಕ್ಕಿತ್ತು . ಅದು  ನಮ್ಮ  ಲಕ್  ಅನ್ನಬಹುದು . ಎಲ್ಲರಿಗೂ  ಇದು ಸುಲಭವಾಗಿ  ಕಾಣಸಿಗುವುದಿಲ್ಲ . ಅಂತೂ  ನಮ್ಮ  ನಿರೀಕ್ಷಣೆಯ  ಕ್ಷಣಗಳು  ಮುಗಿದಿತ್ತು . ಮನಸ್ಸಿಗೆ  ನೆಮ್ಮದಿ . ಎಲ್ಲವನ್ನೂ  ನಮ್ಮ  ಕ್ಯಾಮೆರಗಳಲ್ಲಿ ಸೆರೆಹಿಡಿದಿದ್ವಿ.




ಇದಾದ  ಮೇಲೆ  tribal ಜನರ  ಗುಡಿಸಲು  ಕಾಣಿಸಿತು . ಹೀಗೆ  2.30 ಗಂಟೆಗಳ  ಕಾಲ  ಸುತ್ತಿದ  ಮೇಲೆ  exit ಗೇಟ್  ಹತ್ರ  ಬಂದಿದ್ದೋ . ಸಂಜೆಗೆ  forest ಡಿಪಾರ್ಟ್ಮೆಂಟ್ ನವರು  Gir forest ನ  ಬಗ್ಗೆ  ಒಂದು  ಡಾಕ್ಯುಮೆಂಟರಿ  ಸಿದ್ದಪಡಿಸಿದ್ದರು .  ಇದನ್ನು  ನೋಡಿದ  ಮೇಲೆ  ಹೋಟೆಲ್  ಗೆ  ಮರಳಿ , ಊಟ ಮುಗಿಸಿ  ನಿದ್ರಾ  ದೇವಿಗೆ  ಶರಣಾದೆವು . ಮಾರನೆ  ದಿನ  Diu ಗೆ  ಹೊರಡೋದಿತ್ತು.

Monday, 30 December 2013

ಪಯಣ

ನನ್ನ  ಪಯಣ  ಗಾಂಧಿ ಹುಟ್ಟಿದ  ನಾಡು  ಗುಜರಾತ್ ನ  ಕಡೆ  ತಿರುಗಿತ್ತು . ಕೆಲಸದಿಂದ  ಒಂದು Break ಬೇಕಿತ್ತು .  Incredible ಇಂಡಿಯಾದಲ್ಲೊಂದು memorable journey ಮಾಡುವ ಆಸೆ ಇತ್ತು. ಸ್ನೇಹಿತರ ಜೊತೆ  ಹೊರಟಿದ್ದೆ . 10 ದಿನಗಳ  ಪಯಣ. ಹೊರಟಾಗ ಎಲ್ಲರೂ ತಮಾಷೆ ಮಾಡಿದ್ದರು ನರೇಂದ್ರ ಮೋದಿಯನ್ನು ಭೇಟಿಯಾಗಲು ಹೊರಟಿದ್ಯ ಅಂತ. ಆದರೆ ನನಗೆ ಗುಜರಾತ್ನಲ್ಲಿ ಗಾಂಧಿಯ  ಮನೆ , ಆಶ್ರಮ , ಸೋಮನಾಥನ ದರ್ಶನ , ಜ್ಯೋತಿರ್ಲಿಂಗಗಳ  ದರ್ಶನ , ದ್ವಾರಕೆಯ  ಕೃಷ್ಣನ  ಭೇಟಿ , Diu ನ  Beach ಗಳ  ಕಡೆ  ಒಂದು  ನೋಟ , Jamnagarದ  ಸಮುದ್ರ  ನಡಿಗೆ, Baroda ದ  Museum ಹಾಗೂ ಅರಮನೆಯ  ಒಂದು  ಪಕ್ಷಿ  ನೋಟ , ಚಂಪಾನಗರಿಯ ಪುರಾತನ  Architecure ಪರಿಚಯ , ಹೀಗೆ  ಎಲ್ಲವನ್ನೂ ನೋಡುವ ಯೋಚನೆ  ಇತ್ತು . ಅಹಮದಾಬಾದ್  ನಿಂದ  start ಮಾಡಿ , ಗುಜರಾತನ್ನು  ಸುತ್ತಿ  ಮತ್ತೆ  ಅಹಮದಾಬಾದ್  ಗೆ  ಮರಳಿ  ಅಲ್ಲಿಂದ  ಬೆಂಗಳೂರನ್ನು  ತಲುಪುವ  ಪ್ಲಾನ್ ಇತ್ತು. ಎಲ್ಲ  ಪ್ಲಾನ್  ಪ್ರಕಾರ  ನಡೆದಿತ್ತು .
 
 
Colours of Gujarat :
ಗುಜರಾತ್  ಒಂದು  ಅಧ್ಬುತ ನಗರಿ. ಸಾಕಷ್ಟು ಮಹಾನುಭಾವರನ್ನು ಕಂಡ ನಾಡು. ಗಾಂಧಿ ಹುಟ್ಟಿದ ನಾಡು  ಗುಜರಾತ್ . ಉಕ್ಕಿನ  ಮನುಷ್ಯ  ಸರ್ದಾರ್  ವಲ್ಲಭಾಯಿ ಪಟೇಲ್ , ವಿಪ್ರೊ ಚೀಫ್  ಅಜೀಂ ಪ್ರೇಮಜಿ ಹೀಗೆ  ಸಾಕಷ್ಟು  ಜನರನ್ನು  ಬೆಳೆಸಿದ  ನಗರಿ . ಭಾರತದಲ್ಲೇ  ಪ್ರಸಿದ್ದಿಯಾದ  ಗೀರ್ ಅರಣ್ಯ ಇಲ್ಲಿದೆ . ಫುಣ್ಯಸ್ಥಳಗಳಾದ ಸೋಮನಾಥ , ದ್ವಾರಕೆಯ  ಮಂದಿರಗಳು  ಇಲ್ಲಿವೆ . 12 ಜ್ಯೋತಿರ್ಲಿಂಗಗಳ ಪೈಕಿ , 2 ಜ್ಯೋತಿರ್ಲಿಂಗ  ಗುಜರಾತಿನಲ್ಲಿದೆ. ಆಗಿನ  ಕಾಲದ ಗಾಯಕವಾಡ್ ಮನೆತನದ ಸಯ್ಯಾಜಿ ರಾವ್ ಗಾಯಕವಾಡ್ ಅವರ  ಕಾಲದಲ್ಲಿ  ಕಟ್ಟಿಸಿದ  ಲಕ್ಷ್ಮಿ ವಿಲಾಸ್ ಪ್ಯಾಲೇಸ್  ಈಗಲೂ ನೋಡಲು  ಮನಮೋಹಕವಾಗಿದೆ .ಹೀಗೆ  ಹಲವು  ವಿಶೇಷತೆಗಳನ್ನೊಳಗೊಂಡ  ಗುಜರಾತ್ ನ  ಇನ್ನೊಂದು  ವಿಶೇಷ  ಎಂದರೆ  ಕುಡಿತ  ಇಲ್ಲಿ  ಸಂಪೂರ್ಣ  ನಿಶಿದ್ದ .
 
ಇಲ್ಲಿನ  ಜನ  ಸಿಹಿಪ್ರಿಯರು . ಹಾಲಿನ  ಉತ್ಪನ್ನಗಳಿಂದ  ಮಾಡಿದ  ಸಿಹಿತಿಂಡಿಗಳು  ಇಲ್ಲಿ  ಹೇರಳ . ಧೋಕ್ಲಾಸ್, ಸೇವ್  ಉಸಲ್ , ಘಾಟಿಯ , ಪಾವ್ ಭಾಜಿ, ಪೋಹ  ಇಲ್ಲಿನ  ವಿಶೇಷವಾದ  ತಿಂಡಿಗಳು . Havmore ಐಸ್ಕ್ರೀಂ  ಗುಜರಾತ್  ನ  local brand ಐಸ್ಕ್ರೀಂ . ಇನ್ನು  ಊಟಕ್ಕೆ  ಗುಜರಾತ್  ತಾಲಿ famous. ಬಿಸಿ  ಬಿಸಿ  ಜಿಲೇಬಿ ಬಾಯಲ್ಲಿ  ನೀರೂರಿಸುತ್ತೆ . ತರಾವರಿ  sweets ಗಳು . ಹೀಗೆ  ಬಗೆ  ಬಗೆ  ತಿನಿಸುಗಳನ್ನು  ಗುಜಾರತ್  ನಲ್ಲಿ  ಇರುವಷ್ಟು  ದಿನ  try ಮಾಡಿದ್ವಿ .
ಅರೇಬಿಯನ್  sea, ಸಾಕಷ್ಟು  ಬೀಚ್ಗಳು , ನದಿಗಳು  ಇಲ್ಲಿ  ಕಾಣಸಿಗುತ್ತವೆ . ಹಾಗಾಗಿ  ಇಲ್ಲಿ  ಶಂಕ  ಹಾಗು  ಕಪ್ಪೆ ಚಿಪ್ಪುಗಳನ್ನು ಹೇರಳವಾಗಿ ನೋಡಬಹುದು .ಅದರಿಂದ  ಮಾಡಿದ  ಅಲಂಕಾರಿಕ  ವಸ್ತುಗಳು  ಅಪಾರ , ನೋಡಲು  ಕಣ್ಣಿಗೆ  ಆನಂದ .
ಇಲ್ಲಿನ  ಜನರು  ತುಂಬಾ  ಸ್ನೇಹಜೀವಿಗಳು . ಅವರ  ಉಡಿಗೆ  ತೊಡಿಗೆ  ನಮಗಿಂತ ಭಿನ್ನ . ಗಂಡಸರು frock ಟೈಪ್  ತರ ಇರುವಂಥ ಬಿಳಿಯ ನಿಲುವಂಗಿಯನ್ನು ಹಾಕಿರುತ್ತಾರೆ, ಅದರ  ಜೊತೆ  ಕಚ್ಚೆ  ಪಂಚೆ . ಇನ್ನು  ಹೆಂಗಸರು  ಬಲಬದಿಗೆ  ಸೆರಗು , ತಲೆಯ  ಮೇಲೆ  ಸೆರಗಿನ  ಹೊದಿಕೆ .
 
 
 
ಗುಜರಾತ್, ಪ್ರಾಣಿ, ಪಕ್ಷಿಗಳ  ಬೀಡು  ಅಂತ  ಹೇಳಬಹುದು . ಸಾಕಷ್ಟು  ತರಹದ  ವಿಧ  ವಿಧ  ಪಕ್ಷಿಗಳು  ಇಲ್ಲಿ  ಕಾಣಸಿಗುತ್ತವೆ .
 
ಇಲ್ಲಿಗೆ ಗುಜರಾತ್ ನ ಒಂದು ಕಿರು ಪರಿಚಯ ಮುಗಿಯಿತು.ಇಲ್ಲಿಂದ ಮುಂದೆ ಒಂದೊಂದೇ ಊರುಗಳ ವಿಶೇಷತೆಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ.  
 
  
*Spelling mistakes ಗಳ ಬಗ್ಗೆ ಕ್ಷಮೆ ಇರಲಿ